Posts Tagged ‘corruption’

My new Youtube Channel

ಸೆಪ್ಟೆಂಬರ್ 16, 2021

Hi Dear all!

I have started a new youtube channel to showcase beutiful places around western ghats of Malenadu.

Requesting all of you to subscribe, Share and Support.

My channel link https://youtube.com/channel/UCQfntYfi_D-ev7WSa3AzV8A

Thank you!

ಯಾರು ಈ ಅಣ್ಣಾ ಹಜಾರೆ?

ಜೂನ್ 7, 2011

ಭ್ರಷ್ಟಾಚಾರ ತೊಲಗಿಸಬೇಕು, ನಮ್ಮೊಂದಿಗೆ ಕೈಜೋಡಿಸಿ, ಹೀಗೆ ಕುಳಿತರೆ ನಮ್ಮ ದೇಶವನ್ನ ನಿರ್ನಾಮ ಮಾಡುತ್ತಾರೆ ಬನ್ನಿ ಎಲ್ಲರೂ, ಎಂದು ತಾವೇ ಮೊದಲಿಗರಾಗಿ ಉಪವಾಸ ಕುಳಿತು ಸರ್ಕರಾದ ಖುರ್ಚಿಗಳನ್ನು ನಡುಗಿಸುತ್ತಿರುವ ಮಹಾನ್ ಚೇತನ, ವೀರ ಸೈನಿಕ, ಅಣ್ಣಾ ಹಜಾರೆಯವರಬಗ್ಗೆ ನಮಗೆಷ್ಟು ಗೊತ್ತು? ತಿಳಿದುಕೊಳ್ಳುವ ಪ್ರಯತ್ನದಲ್ಲಿ ಸಿಕ್ಕ ಮಾಹಿತಿಗಳು ಇಲ್ಲಿವೆ ನಿಮಗಾಗಿ….

 ಅಣ್ಣಾ ಮೂಲತಃ ಮುಂಬಯಿ ನ ಅಹಮದ್ ನಗರದ ಹತ್ತಿರದ ಪುಟ್ಟ ಹಳ್ಳಿಯವರು , ಅವರ ಪೂರ್ಣ ಹೆಸರು ಕಿಸನ್ ಬಾಬುರಾವ್ ಹಜಾರೆ . 1937 ಜೂನ್ 15 ರಂದು ಜನನ, ಓದಿದ್ದು 7 ನೇ ತರಗತಿ ಅಷ್ಟೆ, ಬಡತನದ ಕುಟುಂಬ ಒಂದರಿಂದ ಬಂದವರು ಅಣ್ಣಾ. ತಂದೆ ಬಾಬುರಾವ್ ಹಜಾರೆ ಆಯುರ್ವೇದ ಫಾರ್ಮೆಸಿಯಲ್ಲಿ ನೌಕರ, ಅಣ್ಣಾ ಹಜಾರೆಯವರಿಗೆ 6 ಜನ ಸೋದರ ಸೋದರಿಯರು. ಮನೆಯಲ್ಲಿ ಕಡುಬಡತನ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ, ಆ ಮಧ್ಯೆ ಅವರ ಚಿಕ್ಕಮ್ಮ ಅಣ್ಣಾ ಅವರನ್ನ ಸಾಕುವ ಹೊಣೆ ಹೊತ್ತು ಈಗಿನ ಮುಂಬಯಿ ಅನ್ನೋ ದೊಡ್ಡ ಮಹಾನಗರಿಗೆ ಕರೆತಂದರು.

 ಮುಂಬೈಗೆ ಬಂದ ನಂತರವೂ ಕಷ್ಟಗಳನ್ನೇ ಅನುಭವಿಸಬೇಕಾಯಿತು ಅದಕ್ಕಾಗಿಯೇ ಅವರ ಶಿಕ್ಷಣ 7 ನೇ ತರಗತಿಗೆ ನಿಂತಿದ್ದು, ನಂತರ ರಸ್ತೆ ಬದಿಯಲ್ಲಿ ಹೂವುಗಳನ್ನು ಮಾರುವ ಹೊಸ ಕೆಲಸ ಆರಂಬಿಸಿಬಿಟ್ಟರು ಹಜಾರೆಯವರು. ಅವರ ಬುದ್ದಿವಂತಿಕೆ ಎಷ್ಟಿತ್ತೆಂದರೆ ನಂತರದಲ್ಲಿ ಅವರದೇ ಆದ 2 ಹೂವಿನ ಅಂಗಡಿಗಳನ್ನು ತೆರೆದು ತಿಂಗಳಿಗೆ ಆಗಿನ ಕಾಲದಲ್ಲಿ 800 ರೂಪಾಯಿಗಳಷ್ಟು ವರಮಾನ ಬರುವಂತೆ ಮಾಡಿ  ಅವರ ಸೋದರನನ್ನೂ ಮುಂಬಯಿ ಗೆ ಕರೆತಂದರು.

 ಆ ನಂತರ ತಮ್ಮನ್ನು ಸಂಪೂರ್ಣವಾಗಿ ದೇಶ ಸೇವೆಗೆ ಮುಡುಪಿಟ್ಟುಕೊಂಡು ಬಿಟ್ಟರು ಹಜಾರೆ, 1963 ರರಲ್ಲಿ ಭಾರತೀಯ ಸೇನೆ ಯಲ್ಲಿ ಚಾಲಕನಾಗಿ ಸೇರಿಕೊಂಡರು ಆಗ ಅಂದರೆ 1965 ರಲ್ಲಿ ನೆಡೆದ ಪಾಕಿಸ್ತಾನದ ವಿರುದ್ದದ ಹೊರಟದಲ್ಲಿ ಬದುಕಿಬಂದ ಅದೃಷ್ಟವಂತರಲ್ಲಿ ಹಜಾರೆಯವರೂ ಒಬ್ಬರು.

 1975 ರಲ್ಲಿ ತಮ್ಮ ಹಳ್ಳಿಯಾದ ರಾಲೆಗಾನ್ ಸಿದ್ದಿ ಗೆ ತಮ್ಮ ಸೇನೆಯ ಕೆಲಸಕ್ಕೆ ಸ್ವನಿವೃತ್ತಿ ಘೊಷಿಸಿಕೊಂಡು ಬಂದರು, ಅಲ್ಲಿ “ತರುಣ್ ಮಂಡಲ್” ಅನ್ನುವ ಯುವಕರ ಸಂಘವೊಂದನ್ನು ಕಟ್ಟಿದರು

ನಂತರ “ಪಾನಿ ಪೊರವತ್ ಮಂಡಲ್” ಅನ್ನು ಸ್ಥಾಪಿಸಿದರು ಹಳ್ಳಿಯ ನೀರಿನ ವ್ಯವಸ್ಥೆಯನ್ನ ಸರಿಪಡಿಸುವ ಉದ್ದೇಶ ಈ ಸಂಸ್ಥೆಯದ್ದು. ತಮ್ಮ ಹಳ್ಳಿಯಲ್ಲಿ ಸಾರಾಯಿ ಮಾರಾಟ ನಿಷೆದಕ್ಕಾಗಿ ಹೋರಾಟ ಪ್ರಾರಂಭ ಮಾಡಿದರು, ಅವರಿಗೆ ಸಿಕ್ಕ ಜನ ಬೆಂಬಲದಿಂದಾಗಿ ಸರಾಯಿ ಮಾರಾಟ ನಿಂತು ಹೋಯಿತು ಆದರೆ ಬೇರೆ ಹಳ್ಳಿಗಳಿಂದ ಜನರು ಸಾರಾಯಿ ಖರೀದಿಸಿ ತಂದು ಕುಡಿಯಲು ಆರಂಭಿಸಿದಾಗ ಅಂತರವರಿಗೆ 3 ಬಾರಿ ಎಚ್ಚರಿಕೆ ಕೊಡುವುದು ನಂತರವೂ ನಿಲ್ಲದಿದ್ದರೆ ಅಂತಹವರನ್ನ ಕಠಿಣ ದೈಹಿಕ ಶಿಕ್ಷೆಗೆ ಗುರಿಪಡಿಸುವುದೆಂದು ನಿರ್ಧಾರ ಮಾಡಿದರು, ಅದಕ್ಕಾಗಿ ಅವರು ಕೊಟ್ಟ ಕಾರಣ ಏನೆಂದರೆ “ಒಬ್ಬ ತಾಯಿ ತನ್ನ ಮಗುವಿಗೆ ಕಹಿಯಾದ ಔಷದವನ್ನು ರೋಗದಿಂದ ಮುಕ್ತಗೊಳಿಸುವ ಉದ್ದೇಶದಿಂದ ಮಾತ್ರ ಕುಡಿಸುತ್ತಾಳೆ ಅವಳಿಗೆ ತನ್ನ ಮಗುವಿನ ಮೇಲೆ ದ್ವೇಷ ವಿರುವುದಿಲ್ಲ ಅಂತೆಯೇ ಈ ಕುಡಕರಿಗೆ ನೀಡುವ ಶಿಕ್ಷೆ  ಬೇರೆಯವರಿಗೆ ಎಚ್ಚರಿಕೆಯ ಘಂಟೆಯಾಗಲಿ ಅನ್ನುವ ಉದ್ದೇಶಬಿಟ್ಟು ವಯಕ್ತಿಕ ದ್ವೇಷವೇನು ಇರುವುದಿಲ್ಲ ” ಅನ್ನುವುದು.

 ನೀರಿನ ಸಮಸ್ಯೆ ನಿಯಂತ್ರಣಕ್ಕೆ ಅಂತರ್ಜಲವನ್ನ ಇಂಗಿಸಿ ಭೂಮಿಯ ಫಲವತ್ತತೆ ಹೆಚ್ಚಿಸುವತ್ತ ಕ್ರಮ ಕೈಗೊಂಡ ಅಣ್ಣಾ ಹಜಾರೆಯವರು ಸ್ವಯಂ ಪ್ರೇರಿತರಾಗಿ ಹಳ್ಳಿಗರು, ಹಳ್ಳ, ಕೊಳ್ಳ, ಹಾಗೂ ಕಾಲುವೆಗಳನ್ನ ಕೊರೆಯಲು ಮುಂದೆ ಬರುವಂತೆ ಮಾಡಿದರು.ಹಾಗೆ ಹಳ್ಳಿಯಲ್ಲಿನ ಹೈನುಗಾರಿಕೆ (ಹಾಲು ಉತ್ಪಾದನೆ) ಯ ಮಟ್ಟವನ್ನ ಹೆಚ್ಚಿಸುವ ನಿಟ್ಟಿನಲ್ಲಿ ರೈತರರಿಗೆ ಹೆಚ್ಚಿನ ತರಬೇತಿಯ ಅಗತ್ಯವನ್ನ ಮನಗಂಡ ಅವರು ಜಿಲ್ಲಾ ಪಂಚಾಯತ್ ಮೂಲಕ ಹಳ್ಳಿಯಲ್ಲಿ ಒಂದು ಹೈನುಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸುವಂತೆ ಮಾಡಿದರು, ಅಂದಿನ ಕಾಲದಲ್ಲಿ ೧೦೦ ಲೀಟರ್ ಪ್ರತಿದಿನದ ಉತ್ಪಾದನೆಯಿಂದ ೨೫೦೦ ಲೀಟರ್ ಉತ್ಪಾದಿಸುವ ಮಟ್ಟಕ್ಕೆ ತರಬೇತಿ ಶಾಲೆ ಹಾಗೂ ಜಿಲ್ಲಾ ಪಂಚಾಯಿತ್ ನೆರವಾಯಿತು.

 ಶಿಕ್ಷಣಕ್ಕಾಗಿ ಹಜಾರೆಯವರ ಕೊಡುಗೆ ಅಪಾರ, ಅವರು ತಮ್ಮ ಹಳ್ಳಿಯಲ್ಲಿನ ಶಿಕ್ಷಣ ಹಾಗೂ ಸುಶಿಕ್ಷಿತರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ  1979 ರಲ್ಲಿ  “ಸಂತ ಯಾದವಬಾಬಾ ಶಿಕ್ಷಣ ಪ್ರಸರಕ ಮಂಡಲ್” ನಿರ್ಮಾಣ ಮಾಡಿ 4 ಲಕ್ಷ ರೂಪಾಯಿಗಳ ಸರ್ಕಾರದ ಧನ ಸಹಾಯದೊಂದಿಗೆ ಅಲ್ಲಿ ಹೈಸ್ಕೂಲ್ ಹಾಗೂ ಹಾಸ್ಟೆಲು ಗಳ ನಿರ್ಮಾಣಕ್ಕೆ ನೆರವಾದರು. ಎಷ್ಟೋ ಬಡ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹೊರ ಊರಿಗೆ ಹೋಗಲಾಗದ್ದನ್ನು ಗಮನಿಸಿದ ಹಜಾರೆ ಈ ಸಾಹಸಕ್ಕೆ ಕೈ ಹಾಕಿದರು. ನಂತರ ಇದರಲ್ಲಿ ಮಹಿಳಾ ಶಿಕ್ಷಣಕ್ಕೂ ಒಟ್ಟು ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರು.

 ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಮಾಡಿದ ಹೋರಾಟದಲ್ಲಿ ಎಷ್ಟರ ಮಟ್ಟಿನ ಜನ ಬೆಂಬಲ ವ್ಯಕ್ತವಾಯಿತೆಂದರೆ ಮಹಾರಾಷ್ಟ್ರ ಸರ್ಕಾರ 2003 ರಲ್ಲಿ  ಮಾಹಿತಿ ಹಕ್ಕು ಕಾಯಿದೆಯನ್ನ ಜಾರಿಗೊಳಿಸಿತು. ಮತ್ತೆ ಕೆಲವೊಂದು ತಿದ್ದುಪಡಿಗಳಿಗೆ ಆಗ್ರಹಿಸಿ ಫೆಬ್ರವರಿ 2004 ಹಾಗೂ  ಆಗಸ್ಟ್ 2006 ರಲ್ಲಿ 2 ಬಾರಿ ಉಪವಾಸ ಸತ್ಯಾಗ್ರಹ ಹೂಡಿದ ಫಲವಾಗಿ ಮಹಾರಾಷ್ಟ್ರ ಸರ್ಕಾರ , ಹಾಗೂ ಕೇಂದ್ರ ಸರ್ಕಾರಗಳೆರಡೂ ಮಾಹಿತಿಹಕ್ಕು ಕಾಯಿದೆಯನ್ನು ಸಮಪ್ರಕವಾಗಿ ಜಾರಿಗೆ ತರುವ ಬರವಸೆ ನೀಡಿದವು.

 ಇನ್ನೂ ಭ್ರಷ್ಟಾಚಾರದ ಅವರ ಹೊರಟದ ಬಗ್ಗೆ ಎರಡು ಮಾತಿಲ್ಲ ಅವರ ಹೋರಾಟ ಮುಂಚಿನಿದಲೂ ನೆಡೆದುಕೊಂಡು ಬಂದಿದೆ. ಅವರ “ಭ್ರಷ್ಟಾಚಾರ ವಿರೋಧಿ ಜನ ಅಂಧೋಳನ” ಅನ್ನುವ ಧ್ಯೇಯ ವಾಕ್ಯದಡಿ ಸುಮಾರು 1991 ರಿಂದಲೂ ವಿವಿದ ಭ್ರಷ್ಟ ಅದಿಕಾರಿಗಳ, ಸರ್ಕಾರಗಳ ವಿರುದ್ಧ  ಹೋರಾಟ ಮಾಡಿದ್ದಾರೆ ಹಾಗೂ ಯಶಸ್ವಿಯಾಗಿದ್ದಾರೆ. ಅವರು ಇದೇ 2011 ಏಪ್ರಿಲ್ ನಲ್ಲಿ ನೆಡೆಸಿದ ಉಪವಾಸ ಸತ್ಯಾಗ್ರಹ ದ ಫಲವಾಗಿ ಲೋಕಪಾಲ್ ಮಸೂದೆ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. 

 ಇಷ್ಟೆಲ್ಲ ಜನಾಗ್ರಹಕ್ಕೆ ಕಾರಣವಾಗಿರುವ ಈ ಜನ ಲೋಕಪಾಲ್ ಕಾಯ್ದೆಯಲ್ಲಿ ಏನಿದೆ? (ದಟ್ಸ್ ಕನ್ನಡ – ಸಂಗ್ರಹ)
* ಕೇಂದ್ರದಲ್ಲಿ ಲೋಕಪಾಲ ಮತ್ತು ಪ್ರತಿರಾಜ್ಯದಲ್ಲಿ ಲೋಕಾಯುಕ್ತ ನೇಮಕ.
* ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆ ಕೂಡ ಸ್ವತಂತ್ರವಾಗಿರುತ್ತದೆ.
* ಭ್ರಷ್ಟ ವ್ಯಕ್ತಿ ರಾಜಕಾರಣಿ, ಅಧಿಕಾರಿ, ನ್ಯಾಯಮೂರ್ತಿ ಯಾರೇ ಆಗಿರಲಿ, ಆರೋಪ ಸಾಬೀತಾದರೆ ಎರಡು ವರ್ಷದಲ್ಲಿ ಜೈಲು ಸೇರಬೇಕು.
* ಭ್ರಷ್ಟ ವ್ಯಕ್ತಿಯಿಂದ ಸರಕಾರಕ್ಕೆ ಆದ ನಷ್ಟವನ್ನು ಶಿಕ್ಷೆ ಆಗುವ ದಿನ ಮರುಪಾವತಿಸಬೇಕು.
* ಸರಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಕೆಲಸ ನೆರವೇರದಿದ್ದರೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗೆ ದಂಡ ವಿಧಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಲಾಗುವುದು.
* ಪಂಚಾಯತ್ ನಲ್ಲಿ ಹಣ ದುರುಪಯೋಗವಾದರೆ, ರೇಶನ್ ಕಾರ್ಡ್ ನಲ್ಲಿ ಗೋಲ್ ಮಾಲ್ ನಡೆದರೆ, ಪೊಲೀಸ್ ಲಂಚ ಕೇಳಿದರು, ರಸ್ತೆ ಸರಿಯಾಗಿ ಹಾಕದಿದ್ದರೆ, ಪಾಸ್ ಪೋರ್ಟ್ ಸೂಕ್ತ ಸಮಯದಲ್ಲಿ ದೊರಯದಿದ್ದರೆ, ಲೈಸೆನ್ಸ್ ನೀಡುವ ಅಧಿಕಾರಿ ಕಿರಿಕ್ ಮಾಡಿದರೆ, ಸಬ್ ರಿಜಿಸ್ಟ್ರಾರ್ ಟೇಬಲ್ ಕೆಳಗೆ ಕೈ ಚಾಚಿದರೆ ಲೋಕಪಾಲನಿಗೆ ದೂರು ನೀಡಬಹುದು.
* ಲೋಕಪಾಲ ರಾಜಕಾರಣಿಗಳಿಂದ ನೇಮಕವಾಗದೆ, ಜನರಿಂದ, ಸಾಂವಿಧಾನಿಕ ಅಧಿಕಾರಿಯಿಂದ, ನ್ಯಾಯಮೂರ್ತಿಗಳಿಂದ ನೇಮಕವಾಗುವುದರಿಂದ ನೇಮಕವಾಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.
* ಜನ ಲೋಕಪಾಲ ಮಸೂದೆ ಜಾರಿಗೆ ಬಂದರೆ ಮುಖ್ಯ ಜಾಗೃತ ಆಯುಕ್ತ, ವಿಚಕ್ಷುದಳ, ಸಿಬಿಐನ ಭ್ರಷ್ಟವಿರೋಧಿ ಶಾಖೆಗಳು ಲೋಕಪಾಲದಲ್ಲಿ ಸೇರಿಕೊಳ್ಳುತ್ತವೆ.
* ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ಲೋಕಪಾಲರಿಂದ ಸಂಪೂರ್ಣ ಭದ್ರತೆ ದೊರೆಯುತ್ತದೆ..

 ಅತ್ಯಂತ ಸಣ್ಣ ಮಟ್ಟದಿಂದ ಯಾವುದೇ ದೊಡ್ಡ ಮಟ್ಟದಲ್ಲಿನ ಭ್ರಷ್ಟಾಚಾರವನ್ನ ಬುಡಮಟ್ಟ ಕಿತ್ತುಒಗೆಯುವ ಪಣ ತೊಟ್ಟಿದ್ದಾರೆ ಹಾಜಾರೆಯವರು. ಅವರು ಟಿ‌ವಿ ಸಂದರ್ಶನ ಒಂದರಲ್ಲಿ “ ಹಿಂದೆಯೂ ಸೈನಿಕನಾಗಿ ಸೇವೆ ಸಲ್ಲಿಸಿದ್ದೆ ಹಾಗೆ ಮುಂದೆಯೂ ದೇಶದ ಆಂತರಿಕ ಶತ್ರುಗಳ ಸದೆಬಡೆಯುವಲ್ಲಿ ಸೈನಿಕನಾಗಿಯೇ ಸೇವೆ ಸಲ್ಲಿಸುತ್ತೇನೆ” ಅನ್ನುವ ಮಾತು ಇಂದಿನ ಯುವಕರಲ್ಲಿ ಸ್ಪೂರ್ತಿ ತುಂಬಬೇಕಿದೆ.

 ಹಜಾರೆಯವರನ್ನ ಅರಸಿಕೊಂಡು ಬಂದ ಪ್ರಶಸ್ತಿಗಳು ಅನೇಕ ಅವು:

 1986- ಇಂದಿರ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (ಕೇಂದ್ರ ದಲ್ಲಿ ಪ್ರದಾನಿಯಾಗಿದ್ದ ರಾಜೀವ್ ಗಾಂಧಿ ಯವರಿಂದ 19 ನವೆಂಬರ್ 1986 ರಲ್ಲಿ ಕೊಡಮಾಡಲ್ಪಟ್ಟಿತು.)

1989 – ಕೃಷಿ ಭೂಷಣ ಪ್ರಶಸ್ತಿ (ಮಹಾರಾಷ್ಟ್ರ ಸರ್ಕಾರದಿಂದ )

1990 – ಪದ್ಮ ಶ್ರೀ ಪ್ರಶಸ್ತಿ

1991-  ಪದ್ಮ ಭೂಷಣ ಪ್ರಶಸ್ತಿ

1996 – ಶಿರೋಮಣಿ ಪ್ರಶಸ್ತಿ.

2008 – ವಿಶ್ವ ಬ್ಯಾಂಕ್ ನಿಂದ “ಜಿತ್ ಗಿಲ್” ನೆನಪಿನ ಪ್ರಶಸ್ತಿ (ಅವರ ಸಾಮಾಜಿಕ ಸೇವೆಗಾಗಿ)

2011 – ರವೀಂದ್ರನಾಥ್ ಟ್ಯಾಗೋರ್  ಶಾಂತಿ ಪುರಸ್ಕಾರ. (Indian institute of Planing and Management ನಿಂದ ಕೊಡಮಾಡಲಾಗಿದೆ )

 ನನ್ನ ಅಭಿಮತ ಏನೆಂದರೆ ಈ ಇಳಿವಯಸ್ಸಿನಲ್ಲೂ ಹುಮ್ಮಸಿನಿಂದ, ಉತ್ಸಾಹದಿಂದ ತಮ್ಮನ್ನು ತಾವು ಜನ ಸೇವೆಗೆ ಮುಡಿಪಿಟ್ಟುಕೊಂಡವರು ಅಣ್ಣಾ ಹಜಾರೆ, ಇಷ್ಟೆಲ್ಲ ಸಾಧನೆ ಮಾಡಿ ಅವರು ಎಂದೋ ರಾಜಕೀಯ ಸೇರಿ ಉನ್ನತ ಹುದ್ದೆಯಲ್ಲಿರಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ, ಅವರ ನಿಸ್ವಾರ್ಥ ದೇಶ ಸೇವಗೆ ನಾವು ನೀವೆಲ್ಲರೂ ತಲೆಬಾಗಲೇ ಬೇಕಲ್ಲವೇ?

ಪ್ರತಿಯೊಬ್ಬ ಭಾರತೀಯನೂ ಕೂಡ ತಮಗಾಗಲಿ ಬೇರೆಯವರಿಗಾಗಲಿ ಭ್ರಷ್ಟಾಚಾರದಿಂದ ತೊಂದರೆ ಆದಾಗ ಒಗ್ಗಟ್ಟಿನಿಂದ ನಿಂತು ಹೋರಾಡಿ ನ್ಯಾಯವದಗಿಸಬೇಕು, ಅಣ್ಣಾ ಹಜಾರೆ ತಮ್ಮ ಹಳ್ಳಿ ರಾಲೆಗಾನ್ ಸಿದ್ಧಿ ಯಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಅಲ್ಲಿನ ಜನ ಬೆಂಬಲ ಎಷ್ಟಿದೆ ಅವರಿಗೆ ಅಲ್ಲವೇ?

 ನಮ್ಮ ಫೇಸ್ ಬುಕ್  ಅಕೌಂಟಿನಲ್ಲಿ ಅಣ್ಣಾ ಹಾಜಾರೆಯವರನ್ನ “like” ಬಟನ್ ಒತ್ತಿ  ನಮ್ಮ ಬೆಂಬಲ ಒದಗಿಸಿದರೆ ಸಾಲದು, ಪ್ರತಿಭಾರಿ ಎಲ್ಲೆಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯುತ್ತದೆಯೋ ಅಲ್ಲಿ ಅತಿ ನಿಷ್ಟುರತೆಯಿಂದ ಹೋರಾಡಿ ನ್ಯಾಯವದಗಿಸುವ ಮನಸ್ಸು ಪ್ರತಿಯೊಬ್ಬನಲ್ಲೂ ಹುಟ್ಟಿದರೆ ಆಗ ಭಾರತ ನಿಜವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗಬಹುದು ಅಲ್ಲವೇ? ನೀವೇನಂತೀರಿ?

 (ಅಣ್ಣಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ವಿಕಿಪೀಡಿಯದ ಈ ಲಿಂಕ್ ನಲ್ಲಿ ಲಭ್ಯವಿದೆ )